ಗುರುವಾರ, ಜನವರಿ 30, 2014

"ದೃಶ್ಯಮಾಧ್ಯಮಗಳಲ್ಲಿ ಡಬ್ಬಿಂಗ್ ಬೇಕೋ ಬೇಡವೋ' ವಿಚಾರಸಂಕಿರಣಕ್ಕೆ ಆತ್ಮೀಯ ಆಹ್ವಾನ




ಆತ್ಮೀಯರೆ

      'ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ'ಯು "ದೃಶ್ಯಮಾಧ್ಯಮಗಳಲ್ಲಿ ಡಬ್ಬಿಂಗ್ ಬೇಕೋ ಬೇಡವೋ' ಎನ್ನುವ ಪ್ರಸ್ತುತ ವಿಷಯದ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ. ಡಬ್ಬಿಂಗ್ ನ ಸಾಧಕ ಬಾಧಕಗಳನ್ನು, ಡಬ್ಬಿಂಗ್ ಕನ್ನಡಕ್ಕೆ ಪೂರಕವೋ ಮಾರಕವೋ ಎನ್ನುವುದನ್ನು ಕುರಿತು ಅರ್ಥಪೂರ್ಣವಾದ ವಿಚಾರ ಮಂಡನೆ ಮತ್ತು ಸಂವಾದವನ್ನು  ಆಯೋಜಿಸಲಾಗಿದೆ. ಸಂವಾದದಲ್ಲಿ ನೀವು ಕೂಡಾ ಭಾಗವಹಿಸಬಹುದಾಗಿದೆ. ಚಲನಚಿತ್ರ ನಿರ್ದೇಶಕರುಗಳಾದ ಬಿ.ಸುರೇಶ್ ಮತ್ತು ರಾಧಾಕೃಷ್ಣ ಪಲ್ಲಕ್ಕಿ ಹಾಗೂ ಶಶಿಕಾಂತ ಯಡಹಳ್ಳಿಯವರು ವಿಚಾರವನ್ನು ಮಂಡಿಸಲಿದ್ದಾರೆ.

          02-02-2014 ರಂದು ಭಾನುವಾರ ಸಾಯಂಕಾಲ 4.30 ಗಂಟೆಗೆ  'ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ', ಶಾಂತಿನಿವಾಸ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪಕ್ಕ, ಆತ್ರಿಯಾ ಹೋಟೇಲಿನ ಎದುರು, ಪ್ಯಾಲೇಸ್ ರಸ್ತೆ, ಪ್ರೀಡಂ ಪಾರ್ಕ ಹತ್ತಿರ, ಬೆಂಗಳೂರು. ಇಲ್ಲಿ ಸೆಮಿನಾರ್ ನಡೆಯುತ್ತಿದ್ದು ಆಸಕ್ತರಿಗೆಲ್ಲಾ  ಆಹ್ವಾನವಿದೆ. ತಪ್ಪದೇ ಬನ್ನಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ